ಶ್ರೀ ಸಿಗಂದೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ ಬರೆದು ನಿರ್ಮಾಣ ಶಶಿಕುಮಾರ್, ಇವರ ವಜ್ರಮುಖಿ ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇವರು ಈ ಹಿಂದೆ ಸಿಗಂದೂರು ಚೌಡೇಶ್ವರಿ ಮಹಿಮೆ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಸಂಕಲನ-ನಿರ್ದೇಶನ-ಆದಿತ್ಯ ಕುಣಿಗಲ್, ಛಾಯಾಗ್ರಹಣ - ಪಿ.ಕೆ.ಹೆಚ್. ದಾಸ್ ಸಂಗೀತ- ರಾಜ್ಭಾಸ್ಕರ್, ಸಾಹಿತ್ಯ-ವಿ.ನಾಗೇಂದ್ರಪ್ರಸಾದ್, ಸಂಭಾಷಣೆ-ವಿನಾಯಕರಾಮ್ ಕಲೆಗಾರ್-ಕಿಂಗ್ ಕಿಶೋರ್, ಸಾಹಸ-ಕೌರವ ವೆಂಕಟೇಶ್, ನೃತ್ಯ-ಅರವಿಂದ್, ನಿರ್ವಹಣೆ-ದಾಡಿ ರಮೇಶ್.ಈ ಚಿತ್ರದ ತಾರಾಗಣದಲ್ಲಿ - ನೀತು, ದಿಲೀಪ್ ಪೈ, ಸಂಜನಾ, ಶೋಭಿತಾ, ಪ್ರಕಾಶ್ ಹೆಗ್ಗೋಡು, ರವಿಕಿರಣ್, ನೇಹಾ, ರಾಘವೇಂದ್ರ ರೈ, ಶಶಿಕುಮಾರ್, ಅನಿಲ್ ಕುಮಾರ್, ಸ್ವಪ್ನಶ್ರೀ, ಕು||ಪ್ರೇಕ್ಷಾ ಮುಂತಾದವರಿದ್ದಾರೆ.