ಸಂತು ಲವ್ಸ್ ಸಂಧ್ಯಾ ಚಿತ್ರೀಕರಣ ಮುಕ್ತಾಯ
Posted date: 13 Mon, May 2019 – 09:34:38 PM

ಮನೋಜ್ ಮೂವಿ ಮೇಕರ‍್ಸ್ ಲಾಂಛನದಲ್ಲಿ ಶಶಿಕುಮಾರ್, ದೇವರಾಜ್, ಶಬರೀಶ್ ನಿರ್ಮಿಸುತ್ತಿರುವ ಸಂತು ಲವ್ಸ್ ಸಂಧ್ಯಾ ಚಿತ್ರಕ್ಕೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ನಡೆದಂತ ನೈಜ ಘಟನೆಯನ್ನಾಧಾರವಾಗಿಟ್ಟುಕೊಂಡು ನಿರ್ದೇಶಕರು ಚಿತ್ರಕ್ಕೆ ಕಥೆಯನ್ನು ರಚಿಸಿದ್ದಾರೆ. ಯಲ್ದೂರಿನಲ್ಲಿ ನಾಯಕನ ತಂದೆ ತನ್ನ ಮಗಳಿಗೆ ಅನ್ಯಾಯವಾಗಿದೆಯೆಂದು ನಾಯಕನ ಸ್ನೇಹಿತರನ್ನು ಕೊಲೆ ಮಾಡುವ ದೃಶ್ಯದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿತು.

ಚಿತ್ರಕ್ಕೆ ಆರ್.ಕೆ. ಗಾಂಧಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಪೌಲ್‌ರಾಜು ಛಾಯಾಗ್ರಹಣ, ಗಂಡಾಡಿ ಕೃಷ್ಣ ಸಂಗೀತ, ಸುರೇಶ್ ಕಂಬಳಿ ಸಾಹಿತ್ಯ, ಶಂಕರ್ ಸಾಹಸ, ಸಾನ್ವಿ ನೃತ್ಯ ನಿರ್ದೇಶನ, ವಿನಯ್ ಜಿ. ಆಲೂರು ಸಂಕಲನವಿದೆ. ಜೈ ಸುಬ್ರಮಣಿ, ಸುಷ್ಮಾಗೌಡ, ಬಲರಾಂ, ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾಧನ್, ಹೊನ್ನವಳ್ಳಿ ಕೃಷ್ಣ, ಜ್ಯೋತಿ ಮೂರೂರು, ಕಾವ್ಯ ಪ್ರಕಾಶ್, ಕೋಲಾರ್ ಬಾಲು, ದಿಂಬಾಲ ಅಶೋಕ್, ಮಹೇಶ್ ಬ್ರೂಸ್ಲಿ, ತಿರುಪತಿ ರಾಜು, ನಾಗರಾಜ್ ಇನ್ನೂ ಮುಂತಾದವರ ತಾರಾ ಬಳಗವಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed