ಉದಯ್ ಆರ್ಟ್ಸ್ ಲಾಂಛನದಲ್ಲಿ ಮಲ್ಲಿಕ್ ಮಂದೇಶ್(ಮಣಿ ಬಾರ್ಕೂರು) ಅವರು ನಿರ್ಮಿಸುತ್ತಿರುವ ‘ಸರ್ವಂ‘ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರಕ್ಕೆ ಏಳು ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಬೆಂಗಳೂರಿನಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ದ್ವಿತೀಯ ಹಂತದಲ್ಲಿ ನಡೆಯಲಿದೆ.
ಸ್ವಾಮಿರಾಮ್ ದೇವರಮನೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ವಿವೇಕ್ ಚಕ್ರವರ್ತಿ ಹಾಗೂ ಸತೀಶ್ ಬಾಬು ‘ಸರ್ವಂ‘ಗೆ ಸಂಗೀತ ನೀಡುತ್ತಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಶ್ರೀಕಾಂತ್(ಉಗ್ರಂ) ಸಂಕಲನ, ಜೈ ಹರಿ, ಜೈ ಆರ್ಯ ನೃತ್ಯ ನಿರ್ದೇಶನ ಹಾಗೂ ವಿನೋದ್, ಡಿಫ಼ರೆಂಟ್ ಡ್ಯಾನಿ, ರಮೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ರವಿಕುಮಾರ್, ಸುಜಯ್ ಆರ್ಯ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಬಿಂಬಿಕ, ಪ್ರಿಯ ಹೆಗ್ಡೆ, ಸಾಧುಕೋಕಿಲ, ಬಿರಾದಾರ್, ರಾಕ್ಲೈನ್ ಸುಧಾಕರ್ ಮುಂತಾದವರಿದ್ದಾರೆ