ಬಿಯಾನ್ ಡ್ರೀಮ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ 5 ಅಡಿ 7 ಅಂಗುಲ ಚಿತ್ರಕ್ಕೆ ಕಥೆ ಬರೆದು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ - ನಂದಳಿಕೆ ನಿತ್ಯಾನಂದ ಪ್ರಭು, ಇದು ಇವರ ಪ್ರಥಮ ಚಿತ್ರ. ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ- ನಂದಳಿಕೆ ನಿತ್ಯಾನಂದ ಪ್ರಭು, ಇದು ಇವರ ಪ್ರಥಮ ಚಿತ್ರ. ಚಿತ್ರದ ಛಾಯಾಗ್ರಹಣ ರುದ್ರಮುನಿ ಬೆಳೆಗೆರೆ. ಸಂಗೀತ -ರಘುತಾಣೆ, ಆರ್.ಎಸ್.ಗಣೇಶ್, ಸಂಕಲನ- ಬಿ.ಎಸ್. ಕೆಂಪರಾಜು, ಕಾರ್ಯಕಾರಿ ನಿರ್ಮಾಪಕರು - ನಂದಳಿಕೆ ವಿವೇಕಾನಂದ ಪ್ರಭು-ಜಗದೀಶ್ ಮಳವಳ್ಳಿ, ಸಸ್ಪೆನ್ಸ್, ಥ್ರಿಲ್ಲರ್, ಕಥಾವಸ್ತುವುಳ್ಳ, ಈ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಯು.ಎ ಸರ್ಟಿಫಿಕೆಟ್ ನೀಡಿದೆ. ಬೆಂಗಳೂರು, ನೆಲಮಂಗಲ, ತಡಿಯಾಂಡಮೌಳ್, ಶುಂಟಿಕೊಪ್ಪ, ಮಡಿಕೇರಿ, ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ರಾಸಿಕ್ಕುಮಾರ್, ಭುವನ್, ಅದಿತಿ, ವೀಣಾಸುಂದರ್, ಸತ್ಯನಾಥ್, ಪ್ರಣವ ಮೂರ್ತಿ, ಚಕ್ರವರ್ತಿ, ಮಹದೇವ್, ಪವನ್ಕುಮಾರ್, ಸಂತೋಷ್, ವೆಂಕಟ್, ಶ್ರೀಶಭಾರದ್ವಾಜ್, ನವೀನ್, ಕಿಶೋರ್, ಕುಶಾಲ್ ರಾಜ್, ಮದನ್ ರಾಜ್, ಮಾಸ್ಟರ್ ನಾಗೇಂದ್ರ ಪ್ರಸಾದ್ ಮುಂತಾದವರು ಅಭಿನಯಿಸಿದ್ದಾರೆ.