ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಂಬ ವಿಭಿನ್ನ ಜಾನರ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಗುರುತಿಸಿಕೊಂಡಿದ್ದ ಕುಮಾರ್ ಅವರೀಗ ಮತ್ತೊಂದು ಹಾಸ್ಯಮಯ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು ’ಕ್ರಿಟಿಕಲ್ ಕೀರ್ತನೆಗಳು’. ನಿರ್ದೇಶನದ ಜೊತೆಗೆ ಕೇಸರಿ ಫಿಲಂಕ್ಯಾಪ್ಚರ್ ಲಾಂಛನದಲ್ಲಿ ತಮ್ಮ ಸ್ನೇಹಿತರ ಜೊತೆಸೇರಿ ಈ ಚಿತ್ರವನ್ನು ನಿರ್ಮಾಣ ಸಹ ಮಾಡಿದ್ದಾರೆ, ಈ ಚಿತ್ರವು ಇದೇ ತಿಂಗಳ ೧೩ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕ್ರಿಕೆಟ್ ಬೆಟ್ಟಿಂಗ್ನ ಸುತ್ತ ಏನೇನೆಲ್ಲ ನಡೆಯುತ್ತದೆ ಎಂಬ ಘಟನೆಗಳನ್ನು ಈ ಚಿತ್ರ ಒಳಗೊಂಡಿದೆ. ಅಲ್ಲದೆ ಈ ಚಿತ್ರಕ್ಕಾಗಿ ನವೀನ್ ಸಜ್ಜು ಹಾಡಿರುವ ಐಪಿಎಲ್ಲು ನಮ್ಮೆಲ್ಲರ ಬಾಳು, ಜೂಜಲ್ಲಿಬಿದ್ರೆ ಬಾಳೆಲ್ಲಗೋಳು ಎಂಬ ಹಾಡು ಈಗಾಗಲೇ ಎಲ್ಲೆಡೆ ವೈರಲ್ ಆಗಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕುಮಾರ್.ಎಲ್. ಅವರಿಗೆ ಇದು ಮೂರನೇ ಚಿತ್ರ. ಈ ಚಿತ್ರದ ಛಾಯಾಗ್ರಹಣವನ್ನು ಶಿವಸೇನ ಮತ್ತು ಶಿವಶಂಕರ್ ನಿರ್ವಹಿಸಿದ್ದಾರೆ.
ಇನ್ನು ಈ ಚಿತ್ರಕ್ಕೆ ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಸಂಗೀತ ಸಂಯೋಜನೆಯನ್ನು ವೀರ್ ಸಮರ್ಥ್ ಅವರು ಮಾಡಿದ್ದಾರೆ. ಐಪಿಎಲ್ ಬೆಟ್ಟಿಂಗ್ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರಕ್ಕೆ ನೈಜ ಘಟನೆಯೊಂದು ಪ್ರೇರಣೆ. ಸಂಪೂರ್ಣ ಹಾಸ್ಯಮಯ ನಿರೂಪಣೆ ಹೊಂದಿದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ತಬಲಾನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗವಿಶ್ವ, ಅಪೂರ್ವ, ದೀಪಾಜಗದೀಶ್, ಅಪೂರ್ವ ಭಾರದ್ವಾಜ್, ಅರುಣ ಬಾಲ್ರಾಜ್, ಧರ್ಮ, ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ಗುರುರಾಜ ಹೊಸಕೋಟೆ, ಮಾ.ಮಹೇಂದ್ರ, ಮಾ.ಪುಟ್ಟರಾಜು, ಯಶ್ವಂತ್ ಶೆಟ್ಟಿ ಮುಂತಾದವರಿದ್ದಾರೆ.