ಮೃತ್ಯುವನ್ನುಜಯಸುವವನಿಗೆ ಮೃತ್ಯುಂಜಯ ಎಂದುಕರೆಯುತ್ತಾರೆ.ಈಗ ಅದೇ ಹೆಸರಿನಲ್ಲಿಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ.ಪ್ರಚಾರದ ಮೊದಲ ಹಂತವಾಗಿ ನಟಯಶಸ್ಸೂರ್ಯಟೀಸರ್ನ್ನು ಲೋಕಾರ್ಪಣೆ ಮಾಡಿತಂಡಕ್ಕೆ ಶುಭ ಹಾರೈಸಿದರು. ಸ್ಚಚ್ಚ ಭಾರತ ಕಿರುಚಿತ್ರಕ್ಕೆಪ್ರಶಸ್ತಿ, ಮಂತ್ರಂ ಚಿತ್ರವನ್ನು ನಿರ್ದೇಶನ ಮಾಡಿರುವ ಸಂಗಮೇಶ್.ಎಸ್.ಸಜ್ಜನ್ಎರಡನೇ ಪ್ರಯತ್ನಎನ್ನುವಂತೆ ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದುಆಕ್ಷನ್ಕಟ್ ಹೇಳಿದ್ದಾರೆ. ಇವರ ಶ್ರಮಕ್ಕೆ ಶೈಲಜಾಪ್ರಕಾಶ್ ನಿರ್ಮಾಣ ಮಾಡಿರುವುದು ದ್ವಿತೀಯಅನುಭವ. ಸಾಮಾಜಿಕ ವಿಷಯಗಳನ್ನು ಸೆಸ್ಪೆನ್ಸ್ಥ್ರಿಲ್ಲರ್ ಅಂಶUಳ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.ಆತ್ಮಹತ್ಯೆ ವಿರುದ್ದ ಹೋರಾಟಕ್ಕೆ ಮುನ್ನಡಿಇರಲಿದೆ.ಇದರ ಹಿಂದೆ ಹೋಗುವ ಯುವ ಮನಸುಗಳನ್ನು ಪರಿವರ್ತನೆ ಮಾಡಿ ಅವರುಗಳನ್ನು ಸರಿದಾರಿಗೆತರುವುದು.ಇದಕ್ಕೆದಾಸರಾಗುವುದು ಎಷ್ಟು ತಪ್ಪು?ನಾವು ಬದುಕನ್ನು ಹೇಗೆ ನಡೆಸಬೇಕೆಂದು ಸಂದೇಶದಲ್ಲಿ ಸನ್ನಿವೇಶಗಳ ಮುಖಾಂತರತೋರಿಸಲಾಗಿದೆ.
ತಾರಗಣದಲ್ಲಿ ನಾಯಕ ಹಿತೇಶ್, ನಾಯಕಿ ಮಂಗಳೂರಿನ ಶ್ರೀಯಶೆಟ್ಟಿ ಇಬ್ಬರಿಗೂ ಹೊಸ ಅವಕಾಶ. ಮತ್ತೋಂದುಮುಖ್ಯ ಪಾತ್ರದಲ್ಲಿಸೈಕಿಯಾಟ್ರಿಕ್ ವೈದ್ಯರಾಗಿ ಸುಮನ್ನಗರ್ಕರ್ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆಆಟೋರಾಜ, ದುರ್ಗಾಪ್ರಸಾದ್, ಚೇತನ್ದುರ್ಗಾ, ಶಿವುಮಜಾಭಾರತ, ರಂಗಭೂಮಿಕಲಾವಿದೆ ಪವಿತ್ರ, ಚೈತ್ರಾ, ಬಾಬಣ್ಣ ಮುಂತಾದವರು ನಟಿಸಿದ್ದಾರೆ. ಬೆಂಗಳೂರು ಹಾಗೂ ಡಾಬಸಪೇಟೆಯಲ್ಲಿಚಿತ್ರೀಕರಣ ನಡೆಸಲಾಗಿದೆ.ಸಂಗೀತಆನಂದ್ರಾಜ್ ವಿಕ್ರಂ, ಛಾಯಾಗ್ರಹಣ ವಡ್ಡೆದೇವೇಂದ್ರರೆಡ್ಡಿ, ಸಂಕಲನ ಸಾಯಿಸಂದೇಶ್ಅವರದಾಗಿದೆ.
ಕರೋನಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ 198 ಗಂಟೆಗಳ ಕಾಲ ಸತತವಾಗಿ ಶೂಟ್ ಮಾಡಿರುವುದು.ಹಾಗೆಯೇ 800 ಜನರೊಂದಿಗೆಕ್ಲೈಮಾಕ್ಸ್ ದೃಶ್ಯಗಳನ್ನು ಸರೆಹಿಡಿದಿರುವುದು ವಿಶೇಷ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವಚಿತ್ರವು ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆಇದೆ.