ನಳೆ ಶುಕ್ರವಾರ ತೋತಾಪುರಿ ಸ್ವಲ್ಪ ಹುಳಿ ಸ್ವಲ್ಪ ಖಾರ...!
Posted date: 29 Thu, Sep 2022 08:36:35 AM
ನಾವೆಲ್ಲ ಒಂದೇ ಎಂಬ ಭಾವೈಕ್ಯತೆಯ ಸಂದೇಶ ಸಾರುವ  ಕಥಾಹಂದರ ಇರುವ ಚಿತ್ರ ತೋತಾಪುರಿ ಈವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸುರೇಶ್  ಅರ್ಟ್ಸ್‌ ಹಾಗೂ ಮಾನ್ ಫ್ಲಿಕ್ಸ್ ಸ್ಟುಡಿಯೋಸ್ ಮೂಲಕ ಶಿವಲಿಂಗ ಖ್ಯಾತಿಯ ಕೆ.ಎ.ಸುರೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
 
ನವರಸನಾಯಕ ಜಗ್ಗೇಶ್ ಹಾಗೂ ಆದಿತಿ ಪ್ರಭುದೇವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿಜಯ್‌ ಪ್ರಸಾದ್ ಅವರ ನಿರ್ದೇಶನವಿದೆ.  ಕಾನ್‌ಸ್ಟಿಟ್ಯೂಷನ್ ಅಡಿಯಲ್ಲಿ ಬದುಕುತ್ತಿರುವ ನಾವೆಲ್ಲರೂ  ಅಣ್ಣ ತಮ್ಮಂದಿರು ಎಂಬ ಅದ್ಭುತವಾದ ಸಂದೇಶ ಇರುವ ತೋತಾಪುರಿಯಲ್ಲಿ  ಉಪ್ಪು, ಹುಳಿ, ಖಾರ ಎಲ್ಲದರ ಸಮನಾದ ಮಿಶ್ರಣವಿದೆ  ಚಿತ್ರದಲ್ಲಿ ಒಬ್ಬ ಮುಸ್ಲಿಂ ಯುವತಿಯಾಗಿ ನಾಯಕಿ ಅದಿತಿ ಪ್ರಭುದೇವಾ ಕಾಣಿಸಿಕೊಂಡಿದ್ದಾರೆ. 
 
ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾಸುಂದರ್, ಹೇಮಾದತ್, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು  ನಟಿಸಿದ್ದಾರೆ. ಅನೂಪ್ ಸೀಳನ್ ಅವರ ಸಂಗೀತ, ನಿರಂಜನ್ ಬಾಬು ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. 

ನವಿರಾದ ಹಾಸ್ಯದ ಹಿನ್ನೆಲೆಯಲ್ಲಿ ಮನುಷ್ಯತ್ವ, ಮಾನವೀಯತೆಯ ಜೊತೆಗೆ ದೇವರು, ಧರ್ಮದ ವಿಚಾರಗಳನ್ನು  ಈ ಚಿತ್ರ ಹೇಳಲಿದೆ,  ಜೊತೆಗೆ  ಈಗಿನ ಕಾಲಕ್ಕೆ ಅಗತ್ಯವಾದ ಧರ್ಮ ಭಾವೈಕ್ಯತೆಯ ಬಗ್ಗೆ ತೋತಾಪುರಿ ಸಿನಿಮಾ ಮಾತನಾಡಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed