ಮಾತಿನ ಮರುಲೇಪನ ಮುಗಿಸಿದ ಮುರಾರಿ
Posted date: 27/March/2009

ಲಕ್ಷ್ಮೀಕಾಂತ ಮೂವೀಸ್ ಲಾಂಛನದಲ್ಲಿ ಆರ್.ಎಸ್.ಗೌಡ ನಿರ್ಮಿಸುತ್ತಿರುವ ಚೊಚ್ಚಲಕಾಣಿಕೆ ಮುರಾರಿ ಚಿತ್ರದ ಮಾತಿನ ಮರುಲೇಪನ ಕಾರ್ಯವು ಇತ್ತೀಚೆಗೆ ನಗರದ ಕರಿಸುಬ್ಬು ಬಾಲಾಜಿ ಸ್ಟುಡಿಯೋನಿನಲ್ಲಿ ಮುಕ್ತಾಯಗೊಂಡಿತು. ಚಿತ್ರವು ಏಪ್ರಿಲ್ ಅಂತ್ಯದಲ್ಲಿ ತೆರೆಕಾಣಲಿದೆ ಎಂದು ನಿರ್ಮಾಪಕ ಆರ್.ಎಸ್. ಗೌಡ ತಿಳಿಸಿದ್ದಾರೆ.

ಚಿತ್ರಕ್ಕೆ ಬಿ.ಎ. ಮಧು ಚಿತ್ರಕಥೆ ಸಂಭಾಷಣೆ, ಸೂರಿ ಛಾಯಾಗ್ರಹಣ, ವಿ. ಮನೋಹರ್ ಸಾಹಿತ್ಯ-ಸಂಗೀತ, ಮುರುಳಿ, ಅರವಿಂದ್ ನೃತ್ಯ, ಕೌರವ್ ವೆಂಕಟೇಶ್ ಸಾಹಸ, ಮುನಿಸಂಕಲನ, ಗಂಗೂ ನಿರ್ಮಾಣ ನಿರ್ವಹಣೆ ಇದ್ದು, ಈ ಚಿತ್ರವನ್ನು ಹೆಚ್. ವಾಸು ನಿರ್ದೇಶಿಸುತ್ತಿದ್ದಾರೆ.

ತಾರಾಗಣದಲ್ಲಿ ಮುರುಳಿ, ರಶ್ಮಿ, ಮಾಧುರಿ, ಶರತ್ಲೋಹಿತಾಶ್ವ, ಬಿ. ಜಯಮ್ಮ, ಪೆಟ್ರೋಲ್ ಪ್ರಸನ್ನ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed