ಬನಾರಸ್ ಹೀರೋ ಝೈದ್ ಖಾನ್ ಮಹಾಲಯ ಅಮವಾಸ್ಯೆ ನಿಮಿತ್ತ ಬಂಡಿ ಮಹಾಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿಶೇಷ ಪೂಜೆಯಲ್ಲಿಯೂ ಝೈದ್ ಭಾಗಿಯಾಗಿದ್ದರು. ಈ ಭಕ್ತಿಪೂರ್ವಕ ವಾತಾವರಣದ ನಡುವೆಯೇ ಅಭಿಮಾನಿಗಳು ಬನಾರಸ್ ಹೀರೋನೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಬನಾರಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಲೆಂದು ಮನದುಂಬಿ ಹಾರೈಸಿದರು...