ಆನೇಕಲ್ ಬಾಲರಾಜ್ ಯಶಸ್ವೀ ಸಿನಿಮಾಗಳ ನಿರ್ಮಾಪಕ ನಿಧನ
Posted date: 15 Sun, May 2022 05:30:06 PM

ಆನೇಕಲ್ ಬಾಲರಾಜ್ ಯಶಸ್ವೀ ಸಿನಿಮಾಗಳ ನಿರ್ಮಾಪಕ ನಿಧನ   ಆನೇಕಲ್ ಬಾಲರಾಜ್ ಕಳೆದ 20 ವರ್ಷಗಳಲ್ಲಿ ನಿರ್ಮಾಪಕರಾಗಿ ಹತ್ತು ಸಿನಿಮಾಗಳ ನಿರ್ಮಾಣ ಮಾಡಿ ಆಕ್ಷನ್ ಹಾಗೂ ಸೆಂಟಿಮೆಂಟ್ ಚಿತ್ರಗಳ ನಿರ್ಮಾಪಕರೆಂದು ಖ್ಯಾತಿ ಪಡೆದವರು ತಮ್ಮ ಪುತ್ರ ಸಂತೋಷ್ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿ ಗೆದ್ದವರು.   58 ವರ್ಷದ ಆನೇಕಲ್ ಬಾಲರಾಜ್ ಇಂದು ಬೆಳಗ್ಗೆ ವಾಕಿಂಗ್ ಮುಗಿಸಿ ಬರುತಿರುವಾಗ ಅಪಘಾತಕ್ಕೆ ಬಲಿಯಾದರು.  ಸದಾ ನಗುಮುಖ ಮಾತು ಕಡಿಮೆ ಆನೇಕಲ್ ಬಾಲರಾಜ್ 2003 ರಲ್ಲಿ ಕರಿಯ ಸಿನಿಮಾ ಮೂಲಕ ಹೆಚ್ಚು ಸುದ್ದಿ ಮಾಡಿದವರು. ಆಗ ದರ್ಶನ್ ಅಭಿನಯದ ಈ ಸಿನಿಮಾ ಪ್ರೇಮ್ ನಿರ್ದೇಶನದಲ್ಲಿ ಎರಡನೇ ಬಾರಿ ಬಿಡುಗಡೆ ಆಗಿ 100 ದಿವಸ ಪ್ರದರ್ಶನ ಕಂಡಿತು. 1998 ರಲ್ಲಿ ಆನೇಕಲ್ ಬಾಲರಾಜ್ ಹಲೋ ಯಮ ನಿರ್ಮಾಣದಿಂದ ಯಶಸ್ಸು ಪಡೆದವರು. ಆಹಾ,  ಜಕ್ಕ್ಪಾಟ್,  ಕೆಂಪ,  ಜನ್ಮ,  ಗಣಪ,  ಕರಿಯ 2 ಸಿನಿಮಾಗಳನ್ನು  ನಿರ್ಮಾಣ ಮಾಡಿದವರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed