ಕೆ.ಜಿ.ಸ್ವಾಮಿ ನಿರ್ಮಾಣ ಮಾಡಿರುವ, ರವಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದಿರುವ ``ಗ್ರೂಫಿ`` ಚಿತ್ರದ ಟ್ರೇಲರನ್ನು ಮೈಸೂರು ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆ ಮಾಡಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ವೀಕ್ಷಿಸಿರುವ ಮಹಾರಾಜರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ನಿರ್ಮಾಪಕ ಕೆ.ಜಿ.ಸ್ವಾಮಿ, ನಿರ್ದೇಶಕ ರವಿ ಅರ್ಜುನ್, ನಾಯಕ ಆರ್ಯನ್ ಹಾಗೂ ನಾಯಕಿ ಪದ್ಮಶ್ರೀ ಸಿ ಜೈನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಂದಿನವಾರ ``ಗ್ರೂಫಿ`` ರಾಜ್ಯಾದ್ಯಂತ ತೆರೆ ಕಾಣಲಿದೆ.