?ಶಂಕರ ಪುಣ್ಯಕೋಟಿ? ಈ ವಾರ ತೆರೆಗೆ
Posted date: 9/March/2009

ಲೋಟಸ್ ಸಿನಿಮಾಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಗೋಪ್ರೇಮಿಯ ಅಪರೂಪದ ಕಥೆಯನ್ನು ಹೊಂದಿರುವ “ಶಂಕರ ಪುಣ್ಯಕೋಟಿ” ಚಿತ್ರ ಈ ವಾರ ರಾಜ್ಯಾಂದ್ಯಂತ ಬಿಡುಗಡೆ ಕಾಣಲಿದೆ. ಅಮರ್ನಾಥ್ ಹಾಗೂ ಶ್ರೀನಿವಾಸ್ ಸುಧಾ ಅವರ ನಿರ್ಮಾಣದ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವವರು ಜಿ. ಮೂರ್ತಿ. ಪಿ.ಕೆ.ಹೆಚ್. ದಾಸ್ ಅವರ ಛಾಯಾಗ್ರಹಣ, ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ ಸಂಯೋಜನೆ ಹಾಗೂ ಜಿ.ಎಸ್. ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದ್ದು, ಶರತ್ಬಾಬು, ವಿನಯಾ ಪ್ರಕಾಶ್ ಹಾಗೂ ರಮೇಶ್ ಭಟ್ ಪ್ರಮುಖ ತಾರಾಗಣದಲ್ಲಿದ್ದಾರೆ. ಗೋವೇ ವಿಶ್ವದ ಮಾತೆ ಎಂಬ ಅಡಿಬರಹದೊಂದಿಗೆ ತಯಾರಾಗಿರುವ ಈ ಚಿತ್ರದಲ್ಲಿ ಗೋ-ಪ್ರೇಮಿಯೊಬ್ಬನ ಜೀವನದಲ್ಲಿ ನಡೆದಂತಹ ಕರುಣಾಜನಕ ಕಥೆಯನ್ನು ಅಳವಡಿಸಲಾಗಿದೆ. ಇಂಪಾದ ಹಾಡುಗಳನ್ನು ಹೊಂದಿರುವ ಈ ಚಿತ್ರ ಈ ವಾರ ರಾಜ್ಯಾಂದ್ಯತ ತೆರೆಕಾರಣಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed