ಒಂದೇ ಹಾಡಿಗೆ ನಲವತ್ತು ಡ್ರಸ್ ನಗರದಲ್ಲಿ ರಜನಿ
ರಾಮು ಎಂಟರ್ಪ್ರೈಸಸ್ ಲಾಂಛನದಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ಅದ್ದೂರಿ ರಜನಿ ಚಿತ್ರದ ಪ್ರಥಮ ಹಂತದ ಚಿತ್ರೀಕರಣವು ಇದೇ ೨೩ ರಂದು ಮೈಸೂರಿನಲ್ಲಿ ಮುಕ್ತಾಯಗೊಂಡಿತು.
೨೩ ದಿವಸಗಳ ಕಾಲ ನಡೆದ ಚಿತ್ರದ ಚಿತ್ರೀಕರಣದಲ್ಲಿ,
ಖಾಲಿ ಕೂತಿದ್ದ ಈ ರಜನಿ
ಫುಲ್ ಟೈಂಜಾಬ್ ಕೊಟ್ಲು ಸಜನಿ ಎಂಬ ಗೀತೆಯನ್ನು
ಉಪೇಂದ್ರ, ಆರತಿ ಛಾಬ್ರಿಯಾ ಹಾಗೂ ೮೦ ಜನ ಸಹ ನರ್ತಕಿಯರ ಮೇಲೆ ಮೈಸೂರು ಅರಮನೆ, ಲಲಿತಮಹಲ್ಸೆಟ್ ಕಪಿಲಾನದಿ, ರೈಲ್ವೆ ಬೋಗಿ, ಕೆ.ಆರ್.ಎಸ್. ಸುತ್ತಮುತ್ತ ನಾಲ್ಕು ಕ್ಯಾಮೆರಾಗಳನ್ನು ಬಳಸಿ, ಫೈವ್ಸ್ಟಾರ್ ಗಣೇಶ್ ನೃತ್ಯ ನಿರ್ದೇಶನದಲ್ಲಿ ನಿರ್ದೇಶಕ ಥ್ರಿಲ್ಲರ್ ಮಂಜು ಚಿತ್ರಿಸಿಕೊಂಡರು. ಈ ಒಂದು ಹಾಡಿಗೆ ಉಪೇಂದ್ರ ನಲವತ್ತು ಡ್ರಸ್ಗಳನ್ನು ಬದಲಿಸಿದ್ದಾರೆ. ಹಾಗೂ ರಜನಿ ಅಣ್ಣ ರಾಮಚಂದ್ರ (ರಮೇಶ್ಭಟ್) ತುಳಸಿಯನ್ನು ಸರ್ಕಲ್ನಲ್ಲಿ ನಿಲ್ಲಿಸಿ ಗುಂಪು ಸೇರಿಸಿಕೊಂಡು ಲಂಕಾರಾಜು (ದಂಡಪಾಣಿ) ಅವಮಾನ ಮಾಡುತ್ತಿದ್ದಾಗ ಮಿಂಚಿನಂತೆ ಬಂದ ರಜನಿ ಆ ಗುಂಪಿನೊಂದಿಗೆ ಹೋರಾಡಿ ಅಣ್ಣ ಅತ್ತಿಗೆಯನ್ನು ಕಾಪಾಡುವ ಮೈ ನವಿರೇಳಿಸುವ ಸನ್ನಿವೇಶವನ್ನು ನಾಲ್ಕು ಮಾರುತಿ ವ್ಯಾನ್, ಎರಡು ಟೆಂಪೋಟ್ರಾವಲರ್, ೪ ಆಟೋ ಹಾಗೂ ಫೈಟರ್ಸ್ಗಳ ಮೇಲೆ ತಮ್ಮದೇ ಸಾಹಸ ನಿರ್ದೇಶನದಲ್ಲಿ ನಿರ್ದೇಶಕ ಥ್ರಿಲ್ಲರ್ ಮಂಜು, ಜನಾರ್ಧನ್ ಛಾಯಾಗ್ರಹಣದಲ್ಲಿ ಚಿತ್ರಿಸಿಕೊಂಡರು.
ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಇದೇ ೨೮ರಿಂದ ನಗರದಲ್ಲಿ ಆರಂಭವಾಗಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.
ಚಿತ್ರಕ್ಕೆ ರಾಂ-ನಾರಾಯಣ್ ಸಂಭಾಷಣೆ, ಜನಾರ್ಧನ್ ಛಾಯಾಗ್ರಹಣ, ಹಂಸಲೇಖ ಸಂಗೀತ, ಇಸ್ಮಾಯಿಲ್ ಕಲೆ, ಶ್ರೀನಿವಾಸ್ಕುಮಾರ್ ನಿರ್ದೇಶನ ಸಹಾಯ, ಅನಿಲ್, ಸೋಮು, ನಿರ್ಮಾಣ-ನಿರ್ವಹಣೆಯಿದ್ದು, ಚಿತ್ರದ ಸಾಹಸ ಚಿತ್ರಕಥೆ ಮತ್ತು ನಿರ್ದೇಶನ ಥ್ರಿಲ್ಲರ್ಮಂಜು.
ತಾರಾಗಣದಲ್ಲಿ ಉಪೇಂದ್ರ, ಆರತಿ ಛಾಬ್ರಿಯಾ, ಶರತ್ ಲೋಹಿತಾಶ್ವ, ದೊಡ್ಡಣ್ಣ, ಅವಿನಾಶ್, ರಮೇಶ್ಭಟ್, ರಂಗಾಯಣ ರಘು, ಕೋಮಲ್ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಸತ್ಯಜಿತ್, ಪವಿತ್ರಾ ಲೋಕೇಶ್, ಚಿತ್ರಾಶೆಣೈ, ತುಳಸಿ, ಮುಕುಲ್ ದೇವ್ (ಮುಂಬೈ), ದಂಡಪಾಣಿ (ಚೆನ್ನೈ) ಮುಂತಾದವರಿದ್ದಾರೆ.