ಯಾವುದೇ ಅಹಂ ಇಲ್ಲದೆ ಪ್ರೀತಿಯ ಅಂಬಾರಿ ಏರಿ ಸಾಗುತ್ತಿರುವ ನಿರ್ದೇಶಕ ಅರ್ಜುನ್ ತನ್ನ ಚಿತ್ರದ ಬಗ್ಗೆ ವಿಮರ್ಶೆ ಓದಿದಮೇಲೆ ಮಂತ್ರ ಜಪ ಶುರುವಾಗಿದೆ, ನಮ್ಮಂಥ ಹೊಸಬರಿಗೆ ಸಪೋರ್ಟ್ ಕೊಟ್ಟರೆ ಮುಂದೆ ಇನ್ನು ಒಳ್ಲೆ ಚಿತ್ರ ಮಾಡಲು ಸಹಾಯವಾಗುತ್ತೆ, ನನ್ನ ಹೀರೊ ಕಡ್ಡಿ ಪೈಲ್ವಾನ್ ಇರಬಹುದು ಆದ್ರೆ ಅವನು ಎಷ್ಟು ಚೆನ್ನಾಗಿ ನಟಿಸಿದ್ದಾನೆ. ತಮಿಳಿನಲ್ಲಿ ಧನುಷ್ ಕಂಡರೆ ನಮ್ಮವರೆ ಲೈಕ್ ಮಾಡ್ತಾರೆ ನಮ್ಮ ಯೋಗಿಗೇಕೆ ಆ ಯೋಗ ಇಲ್ಲ. ಅರ್ಜುನನಿಗೆ ಕಾಡುತ್ತಿರುವ ಸಮಸ್ಯ ಇದಲ್ಲ, ಅಮ್ರತಧಾರೆ ಚಿತ್ರದ ಕ್ಲೈಮಾಕ್ಸ್ ಇದ್ದಹಾಗಿದೆ ಎಂದಿರುವುದು ಕಹಿ ತಿಂದಹಾಗಾಗಿದೆ. 'ನಿಜ ಚಿತ್ರದಲ್ಲಿ ನಾಯಕಿ ಆ ಚಿತ್ರ ನೋಡಿರುತ್ತಾಳೆ ನಾಯಕನಿಗೂ ಕಡೆಯಲ್ಲಿ ಅದೇ ಚಿತ್ರ ಭಾರಿ ಪ್ರಭಾವ ಬೀರುತ್ತದೆ ನಾನು ಕಾಪಿ ಮಾಡಿಲ್ಲ ಸಿನಿಮಾದಲ್ಲೇ ನೇರವಾಗಿ ಹೇಳಿದ್ದೀನಲ್ಲ, ಎಂದು ಸಮಜಾಯಿಷಿ ಹೇಳುತ್ತಾರೆ, ಅದೇನೆ ಇರಲಿ ಅರ್ಜುನ ಗೆದ್ದಿದ್ದಾರೆ ಅಂಬಾರಿ ಮುಂದೆ ಸಾಗಿದೆ,