ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಕುಟುಂಬ, ಗೌರಮ್ಮ, ದುಬೈಬಾಬು ಸೇರಿದಂತೆ ಯಶಸ್ವಿ ಚಿತ್ರಗಳ ನಿರ್ಮಾಪಕ ಶೈಲೇಂದ್ರ ಬಾಬು ಅವರು ಕುಟುಂಬ ಸಮೇತ ಹಿಮಾಲಯದ ತಾರರ್, ಮರ್ಸರ್ ಮತ್ತು ಸುಂದರ್ಸರ್ ಎಂಬ ಸುಂದರ ಪ್ರದೇಶಗಳಿಗೆ ಒಂದು ವಾರ ಕಾಲ ಚಾರಣ(ಟ್ರಕ್ಕಿಂಗ್)ಗೆ ಹೋಗಿ ಬಂದಿದ್ದಾರೆ.
ಪ್ರಕೃತಿದೇವಿಯ ಸುಂದರ ಮಡಿಲಲ್ಲಿ ಸಂಚರಿಸುವುದೆ ಒಂದು ಸುಂದರ ಅನುಭವ. ಆಗಾಗ ಜೋರಾಗಿ ಸುರಿಯುತ್ತಿದ್ದ ಮಳೆ, ಸಣ್ಣದಾಗಿ ಬೀಳುತ್ತಿದ್ದ ಹಿಮರಾಶಿ ಇಂತಹ ಪ್ರದೇಶದಲ್ಲಿ ನಾವು ನಿಗದಿತ ಸ್ಥಳ ತಲುಪಿ ಲೇ ಲಡಾಕ್ ಗೆ ಮರಳಿದ್ದೇವೆ.
ಲಡಾಕ್ ನಲ್ಲೂ ಬೈಕ್ ರೈಡಿಂಗ್ ಮಾಡಿದ್ದು ಹೆಚ್ಚು ಖುಷಿ ತಂದಿದೆ ಎನ್ನುತ್ತಾರೆ ಶೈಲೇಂದ್ರ ಬಾಬು.