ನವಲಗುಂದದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತಾಜ್‍ಮಹಲ್ 2 ಕನ್ನಡ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ
Posted date: 18 Wed, May 2022 09:08:19 AM
ನವಲಗುಂದದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಆಗಲಿದ್ದು ,ಜವಳಿ ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವರಾದ ಶ್ರೀ ಶಂಕರ್ ಪಾಟೀಲ್ ಮುನೇನಕೊಪ್ಪ ರವರು ನವಲಗುಂದದ ಅಪ್ರತಿಮ ಪ್ರತಿಭೆ ಮನ್ವರ್ಷಿ ನವಲಗುಂದ ರವರು ರಚಿಸಿರುವ ತಾಜ್‍ಮಹಲ್ 2  ಚಿತ್ರದ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾಜಿ ಅರಣ್ಯ ಖಾತೆ ಸಚಿವರಾದ ಶ್ರೀ ಕೆ. ಎನ್ ಗಡ್ಡಿರವರು,ನವಲಗುಂದದ ಮಾಜಿ ಶಾಸಕರಾದ ಶ್ರೀ ಎನ್ ಎಚ್ ಕೋನರಡ್ಡಿ ರವರು, ಕೆಪಿಸಿಸಿ ಸದಸ್ಯರಾದ ವಿಜಯ್ ಕುಲಕರ್ಣಿಯವರು,ನವಲಗುಂದದ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನೋದ್ ಅಸೂಟಿರವರು, ಧಾರವಾಡದ ಮಾಜಿ ಜಿಲ್ಲಾ ಪಂಚಾಯಿತ್ ಉಪಾಧ್ಯಕ್ಷರಾದ ಶ್ರೀ ಶಿವಾನಂದ ಕರಿಗಾರರವರು, ನವಲಗುಂದ ಕರವೇ ಅಧ್ಯಕ್ಷರಾದ ಶ್ರೀ ವಿಕ್ರಮ್ ಕುರಿಯವರ್ ಪಾಲ್ಗೊಳ್ಳಲಿದ್ದಾರೆ.
 
ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇತ್ರ ತಪಾಸಣೆ ಶಿಬಿರವೂ ಕೂಡ ನಡೆಯಲಿದ್ದು 
ಈ ಕಾರ್ಯಕ್ರಮದ ಇನ್ನೊಂದು ವಿಶೇಷ.
 
ದಿನಾಂಕ :22-5-2022
ಸ್ಥಳ :ಗಾಂಧಿ ಮಾರ್ಕೆಟ್ ಆವರಣ ನವಲಗುಂದ
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed