ಧನುಷ್ ಕಂಬೈನ್ಸ್ ಲಾಂಛನದಲ್ಲಿ ಮಹದೇವಯ್ಯ ನಿರ್ಮಿಸುತ್ತಿರುವ, ಬಿ.ರಾಮಪ್ರಕಾಶ್ ನಿರ್ದೇಶನದ “ಶಿವಕಾಶಿ” ಚಿತ್ರದ ಎರಡನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದೆ. ಚಿತ್ರದ ಛಾಯಾಗ್ರಹಣ ಕೆ. ಸತೀಶ್, ಸಂಗೀತ ಗಂಧರ್ವ, ಸಂಕಲನ : ಕಿರಣ್, ಕಲೆ, ಬಾಬು ಖಾನ್, ನಿರ್ವಹಣೆ : ಕೆ.ವಿ.ಎನ್. ಅರಸು, ತಾರಾಗಣದಲ್ಲಿ ಅನಂತನಾಗ್, ಲಕ್ಷ್ಮಿ, ಅಜಿತ್, ಮಾನಸಿ, ಯೋಗೀಶ್ ವೀರ್, ನಕುಲ್, ಶರಣ್, ನಿನಾಸಂ ಅಶ್ವತ್ಥ, ರಮೇಶ್ ಭಟ್, ಸುನೀಲ್ ಪ್ರತಾಪ್, ಮಳವಳ್ಳಿ ಶ್ರೀ ಮಹದೇವಸ್ವಾಮಿ ಮುಂತಾದವರು ಅಭಿನಯಿಸುತ್ತಿದ್ದಾರೆ.