ಉತ್ತರಪ್ರದೇಶದಲ್ಲಿ ``ಭೈರವ`` ನ ಮುಹೂರ್ತ
Posted date: 15 Sat, Jan 2022 06:57:49 PM
ಸುಗ್ಗಿ ಹಬ್ಬದ ಸುಸಂದರ್ಭದಲ್ಲಿ ಚಿತ್ರದ ಮುಹೂರ್ತ ಸಮಾರಂಭ ಉತ್ತರ ಪ್ರದೇಶದ ಗೋವಿಂದ ಪುರದ ಹನುಮಂತನ ಸನ್ನಿಧಿಯಲ್ಲಿ ನೆರವೇರಿದೆ.   

ರಾಮತೇಜ್ ನಿರ್ದೇಶನದ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಚಿದಂಬರ  ಕುಲಕರ್ಣಿ ಆರಂಭ ಫಲಕ ತೋರಿದರು.  ವೈಭವ್ ಬಜಾಜ್ ಹಾಗೂ ಹನಿ‌ ಚೌಧರಿ  (ವಿಸಿಕಾ ಫಿಲಂ ಸಂಸ್ಥೆ) ಸೇರಿ ಕ್ಯಾಮೆರಾ ಚಾಲನೆ‌ ಮಾಡಿದರು. ಉತ್ತರ ಪ್ರದೇಶದ ಬಿಜೆಪಿ ಮುಖಂಡರಾದ ಡಾ||ಮಂಜು ಶಿವಾಜ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. 

ಕಮರೊಟ್ಟು ಚೆಕ್ ಪೋಸ್ಟ್  ಖ್ಯಾತಿಯ  ಸನತ್ ಈ ಚಿತ್ರದ ನಾಯಕ. ನಾಯಕಿಯಾಗಿ ಒಂದು ಮೊಟ್ಟೆ ಖ್ಯಾತಿಯ ಶೈಲಶ್ರೀ ಮುಲ್ಕಿ ಹಾಗೂ ಖಳನಾಯಕನಾಗಿ ಉಮೇಶ ಸಕ್ಕರೆನಾಡು ಅಭಿನಯಿಸುತ್ತಿದ್ದಾರೆ.  

ಸಂದೀಪ್ ಫ್ರೇಡ್ರಿಕ್ ಛಾಯಾಗ್ರಹಣ,   ಕಪಿಲ್ ದೀಕ್ಷಿತ್ ಕ್ರಿಯಾಶೀಲ ನಿರ್ದೇಶನ ಹಾಗೂ ಕರಣ್ ಕ್ಷಿತಿ ಸುವರ್ಣ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಚಿತ್ರತಂಡದ ಸದಸ್ಯರು ಹಾಗೂ ಮೀರತ್ ನಗರದ ಖ್ಯಾತ ವಕೀಲರಾದ ರಾಜಕುಮಾರ ಗುಪ್ತ ಮತ್ತು ಡಾ.ಸಂಜೀವ ಚೌಧರಿ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed